ಜೂಡಿ ನ್ಯೂಸ್ :
ಕೊಪ್ಪಳದಲ್ಲಿ ಲೇಖಕಿಯರಿಗೆ ಸೆ.28 ರಂದು ಪ್ರಶಸ್ತಿ ಪ್ರದಾನ
ಕೊಪ್ಪಳ : ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ೨೮ ಸೆಪ್ಟೆಂಬರ್ ೨೦೨೫ ರಂದು ರವಿವಾರ ಮುಂಜಾನೆ ೧೧ ಗಂಟೆಗೆ ಕೊಪ್ಪಳದ ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಲೇಖಕಿಯರಿಗೆ ಮೀಸಲಾಗಿರುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ.
ದತ್ತಿ ಪ್ರಶಸ್ತಿ ಪ್ರದಾನ : ದಿ.ಲಕ್ಷ್ಮಮ್ಮ ಗಂ. ದೊಡ್ಡ ಪಂಪಣ್ಣ ಗೋನಾಳ ಇವರ ಸ್ಮರಣಾರ್ಥ ನೀಡುವ ದತ್ತಿ ಪ್ರಶಸ್ತಿಗೆ ೨೦೨೧ _ನಾರೀ ಪದ್ಯ -ಸಾವಿತ್ರಿ ಮುಜಮದಾರ್. ೨೦೨೨_ಯಾವುದೇ ಕೃತಿಗಳು ಬಂದಿಲ್ಲ, ೨೦೨೩ ಗದ್ದಲದೊಳಗ್ಯಾಕ ನಿಂತಿ-ಅರುಣಾ ನರೇಂದ್ರ, ೨೦೨೪ ವಚನ ಹೊಳಹು -ರುದ್ರಮ್ಮ ಹಾಸಿನಾಳ ಇವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಸಂಘದ ಸರ್ವಸದಸ್ಯರು ಹಾಜರಿದ್ದು ಯಶಸ್ವಿಗೊಳಿಸಲು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಹಕಾರ ಸಂಘ ನಿ.ಕೊಪ್ಪಳದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ