ಜೂಡಿ ನ್ಯೂಸ್ :
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಪಿಡಿಐಟಿ ಕ್ಯಾಂಪಸ್ ನ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ
ಷಾ ಭವರಲಾಲ್ ಬಾಬುಲಾಲ್ ನಾಹರ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು 2025 ಡಿಸೆಂಬರ್ 7 ರಂದು ನಡೆದ ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ನಮ್ಮ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ರೂಪ ಎಸ್ ಹಳ್ಳುರು, ಶಿವಾನಿ ಎಬಿ, ಎಚ್ ನಿಸಾರ್, ನಾಗರಾಜ್ ಗಂಟಿ, ರಾಮ್ ದತ್ತ, ರಾಮಾ ವಿ ಆಲೂರು, ಏಚ್ ಮನೋಜ್ ಕುಮಾರ್, ವಿದ್ಯಾ ಟಿ, ಲಕ್ಷ್ಮಿ ಕೆ, ಸಿ ಮಂದಾರ, ಎಸ್ ಚೈತ್ರ, ಹೀನ ಕೌಸರ್, ಚಾಗಿ ಲಕ್ಷ್ಮಿ ದೇವಿ, ರಿಯಾನ ಬೇಗಂ, ಗೌಸಿಯ ಬೇಗಂ, ಮಲ್ಲಮ್ಮ, ಉಮ್ಮಿ ಅಸ್ಮ, ರುಕ್ಸಾನ ಬೇಗo, ತೇಜಸ್ವಿನಿ, ರಿಜ್ವಾನ ಬಾನು ಸಿಂಧೂ ಜಿ ಎಂ, ಪತ್ರಿ ಮಠದ ರೇಖಾ, ಶ್ರೀಕಲಾ, ಸಭಾತೈಸೈನ್, ಸ್ಪೂರ್ತಿ, ಎಸ್ ಎಂ ವಿಠ್ಠಲ್ , ಇನ್ನೂ ಶೇಕಡ 50ರಷ್ಟು ಪ್ರಶಿಕ್ಷಣಾರ್ಥಿಗಳು ಪ್ರಥಮ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದಾರೆ, ಮುಂಬರುವ ಶೈಕ್ಷಣಿಕ ವರ್ಷದಿಂದ, ಕಾಲೇಜಿನಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿಶೇಷ ತರಗತಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಗುಡೆಕೋಟೆ ನಾಗರಾಜ್ ಸರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
ಪ್ರಥಮ ಪ್ರಯತ್ನದಲ್ಲಿ ಯಶಸ್ಸುಗಳಿಸಿದ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಬಳ್ಳಾರಿಯ ವೀರಶೈವ ವಿದ್ಯಾ ವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಣೆಕಲ್ ಮಹಾಂತೇಶ್, ಉಪಾಧ್ಯಕ್ಷರಾದ ಶ್ರೀ ಜಾನಕುಂಟೆ ಬಸವರಾಜ್, ಕಾರ್ಯದರ್ಶಿಗಳಾದ ಡಾ. ಅರವಿಂದ್ ಪಟೇಲ್ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಪ್ರಾಂಶುಪಾಲರು, ಎಲ್ಲಾ ಅಧ್ಯಾಪಕ ಬಳಗದವರು, ಬೋಧಕೇತರ ಸಿಬ್ಬಂದಿಗಳು, ಸಂಘದ ಅಜೀವ ಸದಸ್ಯರು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಪ್ರಶಿಕ್ಷಣಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ…

More Stories
ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ಹಂಪಾಪಟ್ಟಣದ ಕಲಾವಿದ ಸುನಿಲ್ ಕುಮಾರ್ ಆಯ್ಕೆ
ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಹಂಪಾಪಟ್ಟಣದ ಜಿ ಶ್ರೀನಿವಾಸ ಆಯ್ಕೆ
ರಂಗಭೂಮಿಯನ್ನೇ ಕಲೆಯನ್ನಾಗಿಸಿಕೊಂಡ : ಪ್ರೇಮ ಗುಳೇದಗುಡ್ಡ