July 12, 2025

ಮುಕ್ತಿಧಾಮದಲ್ಲಿ ಡಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿ  ವರ್ಷಾಚರಣೆ

ಜೂಡಿ ನ್ಯೂಸ್ :

ಹೊಸಪೇಟೆ : ಇಲ್ಲಿನ ಬಳ್ಳಾರಿ ರಸ್ತೆಯ ಮುಕ್ತಿ ಆಶ್ರಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಬುಧವಾರ ಅಲ್ಲಿನ ನಿವಾಸಿಗಳ ಜೊತೆ ಕೇಕ್ ಕತ್ತರಿಸಿ ಸಿಹಿ ಹಂಚಿ ಹೊಸ ವರ್ಷಾಚರಣೆ ಮಾಡಿಕೊಂಡರು.

ಸಾರ್ವಜನಿಕರ ದೂರಿನ ಮೇರೆಗೆ ಹಿಂದಿನ ವರ್ಷ ಇದೇ ದಿನದಂದು ಭೇಟಿ ನೀಡಲಾಗಿದ್ದ ಸಂದರ್ಭದಲ್ಲಿ ಅಲ್ಲಿನ ಜನರೊಂದಿಗೆ ಮೂಲಭೂತ ಸೌಕರ್ಯಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಾಗಿತ್ತು, ಸದರಿಯವರ ಕೋರಿಕೆಯಂತೆ ಸೋರುತ್ತಿರುವ ಮನೆಗಳನ್ನು ದುರಸ್ಥಿ ಮಾಡಿಸಲಾಗಿರುತ್ತದೆ, ಶೌಚಾಲಯದ ವ್ಯವಸ್ಥೆ, ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿರುತ್ತದೆ ಮುಕ್ತಿದಾಮದ ಜನರ ಕೋರಿಕೆಯಂತೆ ಎಲ್ಲಾ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಅವರೆಲ್ಲರೊಂದಿಗೆ 2025 ರ ಹೊಸ ವರ್ಷಾಚರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್, ಪೌರಾಯುಕ್ತ ಚಂದ್ರಪ್ಪ, ಕೆ.ಆರ್.ಎಸ್.ಪಕ್ಷದ ಪ.ಯ.ಗಣೇಶ ಇದ್ದರು.