July 13, 2025

 ಕೊಪ್ಪಳ : ಕೋಟೆ ಪ್ರದೇಶದಲ್ಲಿ ವೈಕುಂಠ ಏಕಾದಶಿ ಉತ್ಸವ

ಜೂಡಿ ನ್ಯೂಸ್ :

ಕೊಪ್ಪಳ,: ನಗರದ ಕೋಟೆ ಹತ್ತಿರರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜ. ೧೦ ರಂದು ಶುಕ್ರವಾರ ಸಾಯಂಕಾಲ ವೈಕುಂಠ ಏಕಾದಶಿ ಉತ್ಸವ ಆಚರಿಸಲಾಗುತ್ತದೆ.

ಅಂದು ದೇವಸ್ಥಾನದಲ್ಲಿ ವೈಕುಂಠ ದ್ವಾರವನ್ನು ನಿರ್ಮಿಸಿ, ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರ ಮಾಡಲಾಗುವದು. ಅಂದು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾಗಬೇಕು ಎಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ವಿನಾಯಕ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.