July 12, 2025

ಹಂಪಾಪಟ್ಟಣದ ನಾಗರಾಜ್ ಗಂಟಿಗೆ ರಾಜ್ಯ ಜಾನಪದ ಯುವ ಸಿರಿ ಪ್ರಶಸ್ತಿ ಪ್ರದಾನ

ಜೂಡಿ ನ್ಯೂಸ್ :

ಹಂಪಾಪಟ್ಟಣದ ನಾಗರಾಜ್ ಗಂಟಿಗೆ ರಾಜ್ಯ ಜಾನಪದ ಯುವ ಸಿರಿ ಪ್ರಶಸ್ತಿ ಪ್ರದಾನ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಜಾನಪದ ಪರಿಷತ್ತಿನ ದಶಮಾನೋತ್ಸವ ಸಮಾರಂಭದ ಪ್ರಯುಕ್ತ, ಕನ್ನಡ ಪ್ರಥಮ ಜಾನಪದ ಸಮ್ಮೇಳನದಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದ ಸುಡುಗಾಡು ಸಿದ್ಧ ಜಾನಪದ ಕಲಾವಿದ ನಾಗರಾಜ್ ಗಂಟಿಗೆ ರಾಜ್ಯ ಜಾನಪದ ಯುವ ಸಿರಿ ಪ್ರಶಸ್ತಿಯನ್ನು ಖ್ಯಾತ ನಟರಾದ ಚೇತನ್ ಅಹಿಂಸ ರವರು ಪ್ರದಾನ ಮಾಡಿದರು,

ಸಂದರ್ಭದಲ್ಲಿ ಪ್ರಥಮ ಜಾನಪದ ಸಮ್ಮೇಳನಾಧ್ಯಕ್ಷರಾದ ಡಾ: ಸಿ ಸೋಮಶೇಖರ. ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್ ಬಾಲಾಜಿ, ಬೆಂಗಳೂರಿನ ಸಿದ್ದರಾಜು ಮಹಾಸ್ವಾಮಿಜಿ ಸಾನಿಧ್ಯ ವಹಿಸಿದ್ದರು.. ಪರಿಷತ್ತಿನ ಪಾದಾಧಿಕಾರಿಗಳು ಸಂಘಟಕರು ಉಪಸ್ಥಿತಿಯಲ್ಲಿದ್ದರೂ.