ಜೂಡಿ ನ್ಯೂಸ್ :
ಕೊಪ್ಪಳ, ಡಿ 30,ಒಂದೇ ಒಂದು ಕಣ್ಣು ಹೊಂದಿರುವ ರಾಜಾಸಾಬ್ ಹವಾಲ್ದಾರ್ ಅವರ ಪುತ್ರ ಮೌಲಾಸಾಬ್ಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವಲ್ಲಿ ಅಸಾಧಾರಣವಾದ ಶ್ರದ್ಧೆ ತೋರಿದ ಕೊಪ್ಪಳದ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಹಾಗೂ ವೈದ್ಯರ ತಂಡಕ್ಕೆಕೊಪ್ಪಳದ ಇನ್ನರ್ ವೀಲ್ ಕ್ಲಬ್ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಎಂದು ಕ್ಲಬ್ಬಿನ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ರವರು ಹೇಳಿ ಲಯನ್ಸ್ ಕಣ್ಣಿನ ಆಸ್ಪತ್ರೆ ವೈದ್ಯರ ತಂಡದ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ,
ಇತರ ಆಸ್ಪತ್ರೆಗಳು ಅಪಾಯವನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದರೆ, ಲಯನ್ಸ್ ಕಣ್ಣಿನ ಆಸ್ಪತ್ರೆಯ ಡಾ.ದೀಪಾ ನೇತೃತ್ವದ ನುರಿತ ತಂಡವು ಅಪ್ರತಿಮ ಪರಿಣತಿ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸಿ ರೋಗಿಗೆ ಹೊಸ ಜೀವನವನ್ನು ನೀಡಿತು. ಈ ಗಮನಾರ್ಹ ಸಾಧನೆಯು ಮಾನವೀಯತೆಗೆ ಸಹಾನುಭೂತಿ ಮತ್ತು ನಿಖರತೆಯೊಂದಿಗೆ ಸೇವೆ ಸಲ್ಲಿಸುವ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸವಾಲಿನ ಸಂದರ್ಭಗಳಲ್ಲಿ ದೃಷ್ಟಿ ಮತ್ತು ಭರವಸೆಯನ್ನು ನಿಜವಾಗಿಯೂ ಪುನಃಸ್ಥಾಪಿಸುವ ಈ ಸ್ಪೂರ್ತಿದಾಯಕ ಪ್ರಯತ್ನಕ್ಕಾಗಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಉಮಾ ತಂಬ್ರಳ್ಳಿ ಮತ್ತು ಕೊಪ್ಪಳದ ಇನ್ನರ್ ವೀಲ್ ಕ್ಲಬ್ನಿಂದ ವಿಶೇಷ ಮೆಚ್ಚುಗೆ ಯನ್ನು ವ್ಯಕ್ತಪಡಿಸಿದ ಆವರು, ಇಂತಹ ಲಯನ್ಸ್ ಕಣ್ಣಿನ ಆಸ್ಪತ್ರೆ ನಮ್ಮ ಕೊಪ್ಪಳ ನಗರದಲ್ಲಿದೆ ಇದು ನಮ್ಮೆಲ್ಲರಿಗೆ ಹೆಮ್ಮೆ, ಸದರಿ ಆಸ್ಪತ್ರೆಯೂ ಕಳೆದ ಸುಮಾರು ಐದು ದಶಕಗಳಿಂದ ನಿರಂತರವಾಗಿ ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿ ಶ್ರಮಿಸುತ್ತಿರುವದು ಸಂತಸ ಉಂಟು ಮಾಡಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ರವರು ವೈದ್ಯರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,

More Stories
ಮಹಿಳೆ ಕೇವಲ ಗೃಹಿಣಿ ಅಲ್ಲ, ಸಮಾಜದ ನಿರ್ಮಾತೃ, ಮಾರ್ಗದರ್ಶಕಿ : ಡಾ. ಅನುಸೂಯ ಅಂಗಡಿ
ಹಂಪಾಪಟ್ಟಣದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ನೀರಿನ ಅರವಟ್ಟಿಗೆ ಪ್ರಾರಂಭ
12ನೇ ಶತಮಾನದ ಶಿವಶರಣೆಯರು ಸ್ವಾಭಿಮಾನದ ಸಂಕೇತ :ಡಾ. ಟಿ ಹೆಚ್ ಬಸವರಾಜ್