January 31, 2026

ಯಲಬುರ್ಗಾ ಹಿರಿಯ ಉಪ ನೋಂದಣಿ ಅಧಿಕಾರಿ ಯಾಸಿನ್ ಮುಲ್ಲಾ ಮೇಲೆ ಭ್ರಷ್ಟಾಚಾರದ ಆರೋಪ

Judi News :

ಯಲಬುರ್ಗಾ ಹಿರಿಯ ಉಪ ನೋಂದಣಿ ಅಧಿಕಾರಿ ಯಾಸಿನ್ ಮುಲ್ಲಾ ಮೇಲೆ ಭ್ರಷ್ಟಾಚಾರದ ಆರೋಪ

ಕೊಪ್ಪಳ : ಜಿಲ್ಲೆಯ ಯಲಬುರ್ಗ ತಾಲೂಕಿನ ಭ್ರಷ್ಟ ಉಪ ನೊಂದನಾಧಿಕಾರಿ ಯಾಸೀನ್ ಮುಲ್ಲಾ ಭ್ರಷ್ಟಾತೀ ಭ್ರಷ್ಟ ಅಧಿಕಾರಿಯಾಗಿದ್ದು, ಯಲಬುರ್ಗಾದ ಉಪ ನೊಂದಣಿಧಿಕಾರಿಯಾಗಿ ಬಹಳ ವರ್ಷಗಳಿಂದ ಇಲ್ಲಿಯೇ ಬಿಡು ಬಿಟ್ಟಿದ್ದಾನೆ ನೋಂದಣಿ ಮಾಡಿಸಿಕೊಳ್ಳಲು ಬರುವ ರೈತರು ಹಾಗೂ ಸಾರ್ವಜನಿಕರ ಆಸ್ತಿ ಕರೀದಿದಾರರು ಈತನ ಭ್ರಷ್ಟ ವರ್ತನೆಯನ್ನು ಕಂಡು ರೋಸಿ ಹೋಗಿದ್ದಾರೆ. ಯಾವ ಮೇಲಾಧಿಕಾರಿಗೂ ಹೆದರದೆ ದಿನನಿತ್ಯ ಹಗಲು ದರೋಡೆ ದಂಧೆ ಪ್ರಾರಂಭಿಸಿದ್ದಾರೆ. 

ವಿಂಡ್ ಪವರ್ ಹಾಗೂ ಸೋಲಾರ್ ಪ್ಲಾಂಟ್ ಹಾಕಲೋ ಒಂದಕ್ಕೆ ಲಕ್ಷ ಲಕ್ಷ ಪಡೆದಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪವು ಕೂಡ ಈತನ ಮೇಲೆ ಇದೆ. ಇಂಥ ಅಧಿಕಾರಿ ವಿರುದ್ಧ ಸೂಕ್ತ ತನಿಖೆ ಮಾಡಿಸಿ ಇಲ್ಲಿಂದ ಕೂಡಲೇ ವರ್ಗಾವಣೆ ಮಾಡಲು ಇಲ್ಲಿನ ರೈತರು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ ಕೂಡಲೇ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತ ವೈ ಬಿ ಜೂಡಿ ಪತ್ರಕರ್ತರಿಗೆ ತಿಳಿಸಿದರು 

 ತನ್ನ ಕಾರ್ಯಾಲಯದಲ್ಲಿ ಅರುಣ್ ಎನ್ನುವ ಹೊರಗಿನ ವ್ಯಕ್ತಿಯ ಮೂಲಕ ವಸೂಲಿ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮುದ್ರಾಂಕಗಳ ಐಜಿಆರ್ ಅವರ ಗಮನಕ್ಕೆ

 ನೊಂದಣಿ ಕಚೇರಿಗಳಲ್ಲಿ ವಿಪರೀತ ಭ್ರಷ್ಟಾಚಾರ ತಾಂಡವ ವಾಡುತ್ತಿದೆ ಜನಾನುರಾಗಿ ದಕ್ಷ ಆಡಳಿತಗಾರರಾದ ಸರ್ಕಾರದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ ಉತ್ತಮಆಡಳಿತಗಾರರು ಎನಿಸಿಕೊಂಡಮುದ್ರಾಂಕಗಳ ಆಯುಕ್ತರಾದ ದಯಾನಂದ ಅಪ್ಪಾಜಿಗೌಡ ಅವರು ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಇದನ್ನು ದೂರೆಂದು ಪರಿಗಣಿಸಿ ಸೂಪರ್ ಕ್ರಮ ಕೈಗೊಳ್ಳಬೇಕಿದೆ.